ಎ.ಸೀತಾರಾಮ್ ರವರ ಸ್ವಾರತ್ಯತ್ವದಲ್ಲಿ ಮೂಡಿಬರುತ್ತಿರುವ "ಸುವರ್ಣ ಲೇಖನಿ"ಹಾಗು "ನ್ಯೂಸ್ ಕರ್ನಾಟಕ1"

ಸುದ್ಧಿ ಹಾಗು ಜಾಹಿರಾತಕ್ಕೆ ಸಂರ್ಪಕಿಸಿ +91 8553310400

ಪ್ರಕೃತಿ ಸಂರಕ್ಷಣೆ ಮಹತ್ವ ಸಸಿಗಳನ್ನು ನೆಡುವ ಅಗತ್ಯದ ಬಗ್ಗೆ ಕಾರ್ಯಾಗಾರ .

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ವಿಜಯಪುರಪಟ್ಟಣದಲ್ಲಿರುವ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವಿಜಯಪುರ ಲೀಜನ್ ಮತ್ತು ಶ್ರೀ ಜಿ ಪ್ರಕೃತಿ ಧರ್ಮ ಪೀಠಂ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಪ್ರಕೃತಿ ಸಂರಕ್ಷಣೆ ಮಹತ್ವ ಮತ್ತು ಸಸಿಗಳನ್ನು ನೆಡುವ ಅಗತ್ಯದ ಬಗ್ಗೆ ಭಾವನಾ ತರಬೇತಿ ಕಾರ್ಯಗಾರವನ್ನು ಏರ್ಪಡಿಸಲಾಗಿತ್ತು

ಈ ಕಾರ್ಯಕ್ರಮದಲ್ಲಿ ಶ್ರೀ ಶ್ರೀನಿವಾಸ್ ಮಾತನಾಡುತ್ತಾ
ಯೋಗ’ ಎಂಬ ಪದವು ಸಂಸ್ಕೃತ ಪದ “ಯುಜ್” ನಿಂದ ಹುಟ್ಟಿಕೊಂಡಿದೆ, ಇದರರ್ಥ ‘ಒಗ್ಗೂಡಿಸುವುದು’ ಅಥವಾ ‘ಸೇರುವುದು’. ಈ ಪ್ರಾಚೀನ ಶಿಸ್ತು ಮನಸ್ಸು, ದೇಹ ಮತ್ತು ಆತ್ಮದ ನಡುವೆ ಸಾಮರಸ್ಯವನ್ನು ಸಾಧಿಸುವುದರ ಮೇಲೆ ಕೇಂದ್ರೀಕರಿಸುತ್ತದೆ.
ಯೋಗವು ಬಹುಮುಖಿ ಆಯಾಮಗಳನ್ನು ಒಳಗೊಂಡಿರುತ್ತದೆ, ಸ್ವಯಂ ಸಾಕ್ಷಾತ್ಕಾರ ಮತ್ತು ಆಂತರಿಕ ಶಾಂತಿಗೆ ವಿವಿಧ ಮಾರ್ಗಗಳನ್ನು ನೀಡುತ್ತದೆ. ಪತಂಜಲಿಯ ಯೋಗ ಸೂತ್ರಗಳು, ಅಡಿಪಾಯದ ಪಠ್ಯವು ಯೋಗದ ಎಂಟು ಅಂಗಗಳನ್ನು ವಿವರಿಸುತ್ತದೆ, ಅಭ್ಯಾಸ ಮಾಡುವವರಿಗೆ ಸಮಗ್ರ ಮಾರ್ಗದರ್ಶಿಯನ್ನು ಒದಗಿಸುತ್ತದೆ.

ಈ ಅಂಗಗಳು ನೈತಿಕ ಮಾರ್ಗಸೂಚಿಗಳನ್ನು (ಯಾಮಗಳು ಮತ್ತು ನಿಯಮಗಳು), ದೈಹಿಕ ಭಂಗಿಗಳು (ಆಸನಗಳು), ಉಸಿರಾಟದ ನಿಯಂತ್ರಣ (ಪ್ರಾಣಾಯಾಮ), ಇಂದ್ರಿಯಗಳ ಹಿಂತೆಗೆದುಕೊಳ್ಳುವಿಕೆ (ಪ್ರತ್ಯಾಹಾರ), ಏಕಾಗ್ರತೆ (ಧಾರಣ), ಧ್ಯಾನ (ಧ್ಯಾನ). ಮತ್ತು ಅಂತಿಮವಾಗಿ, ಜ್ಞಾನೋದಯ (ಸಮಾಧಿ) ಒಳಗೊಳ್ಳುತ್ತವೆ.ದಿನ ನಿತ್ಯ ಯೋಗಾಭ್ಯಾಸ ಮಾಡಿದರೆ ಮಧುಮೇಹ ರಕ್ತದೊತ್ತಡ ಕಡಿಮೆಯಾಗಿ ಆರೋಗ್ಯವನ್ನು ವೃದ್ಧಿಸುತ್ತದೆ.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವಿಜಯಪುರ ಲೀಜನ್ ಅಧ್ಯಕ್ಷರಾದ ಕೆ ವೆಂಕಟೇಶ್ ರವರು ಮಾತನಾಡುತ್ತಾ ನಮ್ಮ ಆರೋಗ್ಯ ಭಾಗ್ಯ ನೆಮ್ಮದಿ ಶಾಂತಿ ಉಳಿಯಬೇಕಾದರೆ ಯೋಗ ಪರಿಸರ ಅತಿಮುಖ್ಯ ವಾಗಿದೆ.ಪರಿಸರ ಉಳಿಯಬೇಕಾದರೆ ಗಿಡಮರಗಳು ಅತ್ಯಾಮೂಲ್ಯವಾಗಿದೆ.

ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಉಪಾಧ್ಯಕ್ಷರಾದ ಸೀನಿಯರ್ ಡಾ ಎಂ ಶಿವಕುಮಾರ್ ರಾಷ್ಟ್ರೀಯ ಸಂಯೋಜಕರಾದ ಸೀನಿಯರ್ ಜಯರಾಮ್ ವಿ ವೆಂಕಟೇಶ್ ಕಾರ್ಯದರ್ಶಿಗಳಾದ ಚಿದಾನಂದ ಮೂರ್ತಿ ಸಹಕಾರ್ಯದರ್ಶಿಯಾದ ವಿ.ಆನಂದ್ ಖಜಾಂಚಿಯಾದ ಎಸ್.ರಮೇಶ್ ಲೀಜನ್ ಸಂಪಾದಕರಾದ ಚಂದ್ರಶೇಖರ್ ಹಡಪದ್ ನಿಕಟ ಪೂರ್ವ ಕಾರ್ಯದರ್ಶಿಗಳಾದ ವಸಂತ್ ಕುಮಾರ್ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You may have missed