ಎ.ಸೀತಾರಾಮ್ ರವರ ಸ್ವಾರತ್ಯತ್ವದಲ್ಲಿ ಮೂಡಿಬರುತ್ತಿರುವ "ಸುವರ್ಣ ಲೇಖನಿ"ಹಾಗು "ನ್ಯೂಸ್ ಕರ್ನಾಟಕ1"

ಸುದ್ಧಿ ಹಾಗು ಜಾಹಿರಾತಕ್ಕೆ ಸಂರ್ಪಕಿಸಿ +91 8553310400

ಮೂಲಭೂತವಾದ ಶಿಕ್ಷಣವನ್ನು ಈ ಸಮುದಾಯ ಪಡೆದಾಗ ಅಭಿವೃದ್ಧಿ ಸಾದ್ಯ: ಸಚಿವ ಮುನಿಯಪ್ಪ

ಪಕ್ಷ ಬೇದ ಮರೆತು ಒಳಮೀಸಲಾತಿಗಾಗಿ ಹೋರಟ ಅನಿವಾರ್ಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ

ಮಾದಿಗ ಮಹಾ ಸಭಾ ವತಿಯಿಂದ ಪ್ರತಿಭಾ ಪುರಸ್ಕಾರ.

ವಿಜಯನಗರ ಜಿಲ್ಲೆ ಮಾದಿಗ ಮಹಾಸಭಾ ವತಿಯಿಂದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಮಾನ್ಯ ಆಹಾರ ನಾಗರಿಕ
ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್. ಮುನಿಯಪ್ಪನವರು ಉದ್ಘಾಟಿಸಿದರು.

ನಂತರ ಮಾತನಾಡಿದ ಸಚಿವರು ಮಹಾತ್ಮ ಗಾಂಧೀಜಿಯವರ ಕಂಡಂತೆ ಇಂದಿನ ಮಕ್ಕಳೆ ಮುಂದಿನ ಪ್ರಜೆಗಳು ವಿದ್ಯಾರ್ಥಿಗಳು ಗುಣಮಟ್ಟದ ವಿದ್ಯಾವಂತರಾಗಳು ಬೋಧಕರ ಮಾರ್ಗದರ್ಶನ ಅತಿ ಮುಖ್ಯ

ಅದೇರೀತಿಯಾಗಿ ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರವೂ ಬಹಳ ಮುಖ್ಯವಾಗಿರುತ್ತದೆ

ನಾನು 1991ರಲ್ಲಿ ಅಂದಿನ ನರಸಿಂಹರಾವ್ ರವರ ಸರ್ಕಾರದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಲಹಾ ಸಮಿತಿಯ ಸದಸ್ಯನಾಗಿ ಕಾರ್ಯನಿರ್ವಹಿಸಿ ಆಶ್ರಮ ಶಾಲೆಗಳ ನಿರ್ಮಾಣದಲ್ಲಿ ಪ್ರಮುಖ ಪಾತ್ರವನ್ನು ವಹಿಸದ್ದು ದೇಶಾದ್ಯಂತ ಎಲ್ಲಾ ರಾಜ್ಯ ಗಳಲ್ಲಿಯೂ ಆಶ್ರಮ ಶಾಲೆಗಳನ್ನು ನಿರ್ಮಿಸಲು ಸುತ್ತೋಳೆಯನ್ನು ಹೊರಡಿಸಿ ಕಾರ್ಯಗತಗೊಳಿಸಿದ್ದೆ

ಹೆಚ್ ಆಂಜನೇಯ ರವರು ಸಮಾಜ ಕಲ್ಯಾಣ ಸಚಿವರಿದ್ದಾಗ ಕೋಲಾರ ಕ್ಷೇತ್ರದಲ್ಲಿ ಸುಮಾರು 25 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ನಿರ್ಮಿಸಿ ಅವುಗಳಿಂದ ಹಲವಾರು ವಿದ್ಯಾರ್ಥಿಗಳ ವಿಧ್ಯಾಭ್ಯಾಸಕ್ಕೆ ಅನುಕೂಲವಾಗುತ್ತಿದೆ ಎಂದರು.

ಈ ವಸತಿ ಶಾಲೆಗಳಲ್ಲಿ ಶೇಕಡಾವಾರು ಎಲ್ಲಾ ವರ್ಗದ ಮಕ್ಕಳು ದಾಖಲಾಗಲು ಸಹಕಾರಿಯಾಗುತ್ತಿದೆ.

ಒಳಮೀಸಲಾತಿಗೆ ಪಕ್ಷ ಬೇದ ಮರೆತು ನಾವೆಲ್ಲಾರು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದಾಗ ನಮಗೆ ನ್ಯಾಯ ಸಿಗುತ್ತದೆ

ಸಾಮಾಜಿಕವಾಗಿ ಆರ್ಥಿಕ ವಾಗಿ ಸಬಲರಾಗಲು ನಮಗೆ ಮೂಲಭತವಾಗಿ ಶಿಕ್ಷಣ ಅತಿ ಮುಖ್ಯವಾಗಿ ಬೇಕಾಗುತ್ತದೆ ಎಂದರು.

ಮಕ್ಕಳು ಮಾಡಿರುವ ಸಾಧನೆಗೆ ಪ್ರತಿಭಾ ಪುರಸ್ಕಾರ ನೀಡುತ್ತಿರುವುದು ಸಂತೋಷ ಕರವಾಗಿದ್ದು ಮುಂದಿನ ಅವರ ಭವಿಷ್ಯ ಸದೃಢವಾಗಲಿ ಎಂದು ಶುಭಕೋರಿದರು.

ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಚಿತ್ರದುರ್ಗ ಗುರು ಪೀಠ,ಪೂರ್ಣಾ ನಂದ ಭಾರತಿ ಸ್ವಾಮೀಜಿ,ಮಾತಾಂಗ ಪರ್ವತ ಹಂಪಿ,ಶಾಸಕರಾದ ಹೆಚ್ .ಆರ್ ಗವಿಯಪ್ಪ, ಮಾಜಿ ಸಚಿವರಾದ ಹೆಚ್ ಆಂಜನೇಯ, ಎ.ನಾರಾಯಣಸ್ವಾಮಿ,ಮುಂಡರಗಿನಾಗರಾಜ (ಲಿಡ್ಕರ್ ನ )ಅಧ್ಯಕ್ಷರು,
ರಾಣಿ ಸಂಯುಕ್ತ, ಹೆಚ್ ಶ್ರೀನಿವಾಸ, ಹಾಗೂ ಮಾದಿಗ ಮಹಾಸಭಾ ಮುಖಂಡರು, ಸಮುದಾಯದ ನಾಯಕರು ,ಪ್ರತಿಭಾ ಪುರಸ್ಕಾರ ಪಡೆದ ಮಕ್ಕಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You may have missed